Monday, December 19, 2011

Heart

I am suffering from love, why would I be the only one ? 
I want you to suffer too.
Hammering some nails into your heart,
Seeing the blood that pours,
And still dissatisfied... 
Your sorrow will never make me feeling better,
I may still love you.

Filled With Dying Dreams

You said that I tasted like cyanide and tears.
I wanted to ask if you had actually ever had cyanide,
But I was too scared to hear the truth.
I used to always wear red,
Because you would say it made my skin look white.
And we both knew that you were always one to like,
Lifeless things.
You gave me a small fragile flower,
And said it was our own little love plant.
But when it started to bloom,
The petals would fall off,
And even though I tried hard to glue them back on
They would just turn black.
I think I just made it worse.
And I never told you.
I told you I loved the stars,
Especially the way they shine with the moon.
You looked up without a word,
Then said that they only came at night for a reason.
When everyone was sleeping.

Friday, November 11, 2011

ಕನಸು- ಕಸ


ಕನಸುಗಳ್ಳಿಲ್ಲದ ಕವನ
ಮನಸುಗಳ್ಳೀಲ್ಲದ ಮಿಲನ
ಪ್ರಾಣವಿಲ್ಲದ ಪಯಣವಿದ್ದಂತೆ

ಪ್ರೀತಿಯಿಲ್ಲದ ಪ್ರಗತಿ
ಕಾರಣವಿಲ್ಲದ ಕರುಣೆ
ನೋಟವಿಲ್ಲದ ನಯನವಿದ್ದಂತೆ

ಸೆಳೆತವಿಲ್ಲದ ಕರುಳು
ಮಾನವತ್ವವಿಲ್ಲದ ಮಮತೆ
ತ್ರಾಣವಿಲ್ಲದ ತನುವಿದ್ದಂತೆ

ಕರುಣೆಯಿಲ್ಲದ ಕರುಳು
ಮಾನವತ್ವವಿಲ್ಲದ ಮನುಷ್ಯ್ಸ
ಕಳೆದುಹೋದ ಕಸವಿದ್ದಂತೆ

Tuesday, October 4, 2011

ಪ್ರೀತಿ-ಹೃದಯ


ಪ್ರೀತಿಸುವ ಹೃದಯ ಸತ್ತಿರುವಾಗ
ಪ್ರೀತಿ ಸಾಯದೇಕೆ....??

ನೀ ಜೀವಿಸಿದ್ದ ಮನವಿರುವಾಗ
ನೀ ಇಲ್ಲವೇಕೆ.......??

ನೀ ಕಂಡ ಕಂಗಳಿರುವಾಗ
ನೀ ಕಾಣುತ್ತಿಲ್ಲವೇಕೆ....??

ನಿನ್ನ ಕನಸುಗಳಿರುವ ರಾತ್ರಿಗಳಿರುವಾಗ
ನೀ ಕತ್ತಲಾದೆಯೇಕೆ.....??

ಆವಿಯಾಗಿದ್ದ ಮೋಡಗಳೆ ಮಳೆಯಾಗಿರುವಾಗ
ನೀ ನನ್ನ ತಣಿಸಲಿಲ್ಲವೇಕೆ...??

ನಿನ್ನ ಪ್ರೀತಿಯಿರದ ಈ ಜೀವ
ನನಗಿನ್ಯಾಕೆ.....??

Tuesday, July 26, 2011

"ಪ್ರೀತಿ ಮಾಡ್ಬೇಕು ಆದ್ರೆ ಗಲೀಜು ಮಾಡ್ಕೊಬಾರ್‍ದು......"


ಪ್ರೀತಿ....!!
         ಈ ಪದವೇ ಎಷ್ಟೊಂದು ಸುಂದರ..... ಸುಮಧುರ.... ವರ್ಣಿಸಲು ಪದಗಳೇ
 ಸಾಲದು. ಯುವಕ ಯುವತಿಯರಿಂದ ಮುದುಕರವರೆಗೂ ಹೃದಯ ಝಲ್ಲೆನಿಸುವಂತೆ 
ಮಾಡಲು ಈ ಪ್ರೀತಿಯೆಂಬ ಮಾಯೆಗೆ ಮಾತ್ರ ಸಾಧ್ಯ. ಸುಮಧುರ ಭಾವನೆ.... ಆಗಸದಲ್ಲೇ
ಹಾರಡುವ ಕಲ್ಪನೆ.... ಸಖ ಸಖಿಯರ ಉನ್ಮಾದ.... ಎಲ್ಲವೂ ಪ್ರೀತಿಯಲ್ಲಿ ಗಾಡವಾಗಿ
ಅಡಗಿವೆ.
       ಆದರೇ.....??
       ಇಂದಿನ ಯುವಕ ಯುವತಿಯರ ನಡುವೆ ಬೆಳೆಯುವ ಪ್ರೀತಿಯೆಂಬ ಪದದ ಭಾಂದವ್ಯ
ಮನಸ್ಸಿನಾಳದ ಭಾಂದವ್ಯವಾಗಿ ಉಳಿದಿಲ್ಲ. ಎಲ್ಲೊ ಕೆಲವರಲ್ಲಿ ಕೆಲವರು ನಿಜವಾದ 
ಪ್ರೀತಿಯಲ್ಲಿ ಮುಳುಗಿರುತ್ತಾರೆ.
      ಪ್ರೀತಿಯಲ್ಲಿ ಮುಳುಗಿರುವವನೇ ಜೀವನದಲ್ಲಿ ಈಜಬಲ್ಲನು ಎನ್ನುವುದು ನನ್ನ ಭಾವನೆ...
ಹೆಚ್ಹಿನವರು ಪ್ರೀತಿಯಲ್ಲಿ ಮುಳುಗಿದ್ದೇವೆ ಎಂಬ ಭಾವನೆಯಲ್ಲೇ ತೇಲುತ್ತಿರುತ್ತಾರೆ.... ಪ್ರೀತಿಗೆ 
ಅದರದ್ದೇ ಆದ ಮಹತ್ವವಿದೆ.... ಅದನ್ನು ಹೆಚ್ಚಿನವರು ಅರಿಯಲು ಸಾಧ್ಯವಾಗಿಲ್ಲ.
ಪ್ರೀತಿಯ ಹೆಸರಲ್ಲಿ ಹಲವಾರು ಜನರು ಮೋಸ ಹೋಗುತ್ತಿದ್ದಾರೆ. ತಮ್ಮ ಜೀವನವನ್ನೆ ನಾಶ
ಮಾಡಿಕೊಳ್ಳುತ್ತಿದ್ದಾರೆ.
        ಇದಕ್ಕೆ ಮುಖ್ಯ ಕಾರಣ ಪ್ರೀತಿಸುವ ಪದ್ದತಿ. ಇಂದಿನ ಹೆಚ್ಚಿನ ಯುವಕ ಯುವತಿಯರು
ಪ್ರೀತಿಯಲ್ಲಿ ಬೀಳುವ ಮುಂಚೆ ಪ್ರೀತಿಸುವವರಲ್ಲಿ ನೋಡುವುದು ಆರ್ಧಿಕತೆಯನ್ನು... ಪ್ರೀತಿಯಲ್ಲಿ
ಇರುವವರೂ ಕೂಡ ಇನ್ನೂ ಹೆಚ್ಚಿನ ಆರ್ಧಿಕ ಬಲವುಳ್ಳವರು ಪ್ರೀತಿಯನ್ನು ಬಯಸಿದರೆ ಅವರ ಕಡೆ
ವಾಲುತ್ತಾರೆ. ಇನ್ನು ಕೆಲವರದ್ದು ಪ್ರೀತಿಯೆಂಬ ಪದದ ಮತ್ತು ಭಾವನೆಯ ಅರ್ಥವೇ ತಿಳಿಯದ
ಹುಚ್ಚಾಟ. ಇಂದು ಒಬ್ಬರು ನಾಳೆ ಇನ್ನೊಬ್ಬರು....
      ಇಂದಿನ ಸಮಾಜಕ್ಕೆ ಬೇಕಾಗಿರುವ ಹಣವೆಂಬ ಭೂತವೊಂದಿದ್ದರೆ ಸಾಕು ಅದರಿಂದ 
ಮೋಜು ,ಮೋಜಿನಿಂದ ಸಂತೋಷ , ಸಂತೋಷದಿಂದ ಪ್ರೀತಿ ಸಿಗುತ್ತದೆ ಎಂಬ ಕನಸ್ಸಿನಲ್ಲಿ
ಹೆಚ್ಚಿನವರು ಮೈಮರೆತಿದ್ದಾರೆ. ಹೆಚ್ಚಿನವರು ಇದನ್ನೇ ಒಂದು ಉದ್ಯೊಗವನ್ನಾಗಿ 
ಮಾಡಿಕೊಂಡಿದ್ದಾರೆ. ಇಂದಿನವರು ಪ್ರೀತಿಸುವ ಪದ್ದತಿ ಹೇಗಿದೆಯೆಂದರೆ
"Heart for sale"
"Heart for Rent" ಎನ್ನುವಂತಿದೆ.


         ನಿನ್ನಲ್ಲಿ ಹಣವಿದೆಯೇ....??
ಹಾಗಾದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎನ್ನುವವರು ಬಹಳ.... ನಿಜವಾದ ಪ್ರೀತಿಗೆ
ಅರ್ಥ ನೀಡುವವರು ವಿರಳ. ಇಂದು ವ್ಯವಹಾರಿಕ ಪ್ರೀತಿ ಹೆಚ್ಚಾಗಿದೆ... ಪ್ರೀತಿಯಲ್ಲಿ ಹೆಚ್ಚಿನವರು
ದೈಹಿಕವಾಗಿ ಪಾವಿತ್ರವನ್ನು ಕಳೆದುಕೊಳ್ಳುತ್ತಿದ್ದಾರೆ.... ಅದಕ್ಕಾಗಿ ಪ್ರೀತಿಯ ಅರ್ಥವನ್ನು
ಸರಿಯಾಗಿ ತಿಳಿದು ಅದನ್ನು ಅನುಭವಿಸಬೇಕು.
      "ಪ್ರೀತಿ ಮಾಡ್ಬೇಕು ಆದ್ರೆ ಗಲೀಜು ಮಾಡ್ಕೊಬಾರ್‍ದು......"

Thursday, July 14, 2011

ನಿನ್ನ ಹೃದಯದಲ್ಲಿಲ್ಲವೇ ನಾನು.......??

ನನ್ನೊಳು ಒಂದು ಮನಸು
ಮನಸಿನೊಳು ಒಂದು ಕನಸು
ಆ ಕನಸಿನೊಳು........?? ನೀನು.....!!

ನೀನೆಂಬುದು ಕನಸು
ನಿನ್ನ ಮನಸಿಗೀಗ ಮುನಿಸು
ತಣ್ಣಗಾದರೆ ತಿಳಿಸು ,ಇಲ್ಲವಾದರೆ ಅಳಿಸು...

ನಿನ್ನಲ್ಲಿ ನಾನು
ನನ್ನ ಮನದಲ್ಲಿ ನೀನು
ಬೆಸೆದಿಲ್ಲವೇನು...?? ಪ್ರೀತಿಯೆಂಬ ಜೇನು...

ನನ್ನ ಕಣ್ಣಲ್ಲಿ ನೀನು
ನನ್ನೀ ಪ್ರೀತಿಯನ್ನು ಕಾಣು
ನಿನ್ನ ಹೃದಯದಲ್ಲಿಲ್ಲವೇ ನಾನು.......??

ನೀ ಮರೆತಿರುವ ಹೃದಯವಿದು...

ದೇಹ ಮಾಡಿದ್ದೆಲ್ಲಾ ಮಣ್ಣಿಗೆ
ಮನಸು ಮಡಿದ್ದೆಲ್ಲಾ ಕಣ್ಣೀರಿಗೆ
ನನ್ನಲ್ಲಿ ನಾನೇ ಇಲ್ಲ ಇಂದಿಗೆ....

ಜೀವ ಹಾರಬಹುದು ಮೆಲ್ಲಗೆ
ನಾನು ಬದುಕಿರಬಹುದು ಸುಮ್ಮಗೆ(ನೆ)
ಪ್ರೀತಿಯೇ ಇಲ್ಲ ಈ ಬದುಕಿಗೆ....

ಸಣ್ಣ ಆಸೆಗಳಿರುವ ಮನಸಿದು
ಬಣ್ಣ ಮಾಸಿರುವ ಕನಸಿದು
ನೀ ಮರೆತಿರುವ ಹೃದಯವಿದು...

ಜೀವವಿಲ್ಲದ ನನ್ನ ಕನಸಿಗೆ
ತ್ರಾಣವಿಲ್ಲದ ಈ ಮನಸಿಗೆ
ಜೀವವಿಡು ನೀ ಬಂದು ನನ್ನಲ್ಲಿಗೆ...

ಪ್ರೀತಿಯ ಬಯಸಿದೆ ನಿನ್ನಲ್ಲಿ
ನೀ ಇಲ್ಲವಾಗಿಸಿದೆ ಕ್ಷಣದಲ್ಲಿ
ನಾನಿಲ್ಲವೆ ನಿನ್ನ ಮನದಲ್ಲಿ....??

Wednesday, March 9, 2011

ನನ್ನ ಬಾಳು ನನ್ನದೇ.......??



ನಾ ಕಾಣುವ ಕನಸು ನನ್ನದಲ್ಲ.....
ನಾ ಕಾಣುವ ಕನಸಿನ ಬಣ್ಣ ನನ್ನದಲ್ಲ.....
ಓ ಜೀವ ಈ ಬಾಳು ನನ್ನದೇ......??
ನಿನ್ನ ಕನಸು ನಿನ್ನವೇ.....??
ನೀ ನಡೆವ ದಾರಿ ನಿನ್ನದೇ.....??

ಯಾರೋ ಬಯಸಿದ ದಾರಿ ನಿನ್ನದು....
ಯಾರೋ ಬದುಕಿ ಬಿಸುಟ ಬಾಳು ನಿನ್ನದು...
ನಿನ್ನ ಕನಸಿಗೆ ಬಣ್ಣ ಬಳಿದವರ್‍ಯಾರೋ.....??
ಯಾರದೋ ಬಣ್ಣಕ್ಕೆ ನಿನ್ನ ಕನಸು......

ಬಯಕೆಗಳ ಬಾಳಿಗೆ ಕನಸ್ಸಲ್ಲೂ ದಾರಿ ಇಲ್ಲ...
ತನು ನಿನ್ನದೇ.... ಆದರೆ ಮನ....??
ಮನದ ಆಸೆ... ಬಣ್ಣವಿಲ್ಲದ ಕನಸೇ....
ನಿನಗೆ ಇಷ್ಟು ಸಾಕೇ.....??

ನಿನ್ನನ್ನು ಕಂಡರೆ ಕಟ್ಟುಪಾಡುಗಳಿಗೆ ಮೋಹ...
ಆಸೆಗಳು ನೂರಾರು.... ಕನಸುಗಳು ಸಾವಿರಾರು..
ದಾರಿಗಳು ಹಲವಾರು... ಆದರೇ.....??
ನಿನ್ನ ಹೆಜ್ಜೆಗಳು ನಿನ್ನ ಬಳಿ ಇಲ್ಲ.....
ಯಾರದೋ ತಾಳಕ್ಕೆ ಕುಣಿವ ನಿನ್ನ ಕನಸುಗಳು...

ನಿನಗೆ ಸ್ವಾಭಿಮಾನವಿಲ್ಲವೇ....??
ಸ್ವಾಭಿಮಾನ....!! ನಿನಗೆಲ್ಲಿಂದ ಬರಬೇಕು....??
ಬೇರೆಯವರ ಆಸೆಗಳಿಗೆ ಅಂಟಿಕೊಂಡ ನಿನಗೆ
ಸ್ವಾಭಿಮಾನದ ಸುಳಿವೆಲ್ಲಿ.....??
ಈ ನಿನ್ನ ಬಾಳು ನಿನ್ನದೆ....??

Tuesday, February 8, 2011

Mother

When u was 1 year old, she fed u & bathed u.
U thanked her by crying all night long.

When u was 5 years old, she dressed u for the holidays.
U thanked her by plopping into the nearest.

When u was 10 years old, she took u & ur friends to the movies.
U thanked her by asking to sit in a different row.

When u was 15, she came home from work, looking for a hug.
U thanked her by having ur bedroom door locked.

When u was 20, she suggested certain careers for ur future.
U thanked her by saying, “I don’t want to be like u”.

When u was 25, she helped to pay for ur wedding, & she cried & told u how deeply she loved u.
U thanked her by moving halfway across the country.

Thursday, January 20, 2011

ಪರಿಚಯ



"ಮಾಯದ ಕನಸಿಗೆ ಸುಳ್ಳು  ನೆನಪಿನ  ಪರಿಚಯ"
"ಗಾಯದ ಮನಸಿಗೆ ಕಳ್ಳ  ಹೃದಯದ ಪರಿಚಯ"


"ಖಾಲಿ ಕೈಗಳಿಗೆ ಹೊಸ ತುಡಿತಗಳ ಪರಿಚಯ "
"ಒಂಟಿ ಬಾಳಲ್ಲಿ ಪ್ರೀತಿಯೆಂಬ ಮುತ್ತಿನ ಪರಿಚಯ "


"ಹಾಯಾದ ದಾರಿಗೆ ಮರೆತ ಸಮಯದ ಪರಿಚಯ "
"ನೋವಾದ ಹೃದಯಕ್ಕೆ ನಲ್ಮೆಯ ಮೊಗದ ಪರಿಚಯ"


"ಹಳೆಯ ನೆನಪುಗಳಿಗೆ ಜೊತೆಯಾದ ಕೈಗಳ ಪರಿಚಯ "
"ಸಾಯದ ಪ್ರೀತಿಗೆ ಬೇಡದ ಸಾಂತ್ವನದ ಪರಿಚಯ"

Sunday, January 9, 2011

ನಾವು ಮತ್ತು ನಮ್ಮ ನಡವಳಿಕೆ

ಮಾನವತ್ವದ ಗುಣಗಳು ಹೇಗಿವೆಯೆಂದರೆ ಒಂದನ್ನು ವಿಸ್ತರಿಸಲು ಹೋದರೆ ಹಲವಾರು ವಿಚಾರಗಳು ಅದರ ನಡುವೆಯೇ ವಿಸ್ತರಿಸಲ್ಪಡುತ್ತವೆ...
ಅದೇ ರೀತಿ ಈ ಬರಹದಲ್ಲೂ ಹಲವಾರು ವಿಚಾರಗಳು ಅಡಗಿವೆ ಮತ್ತು ಅದನ್ನು ನನ್ನ ಮಟ್ಟಿಗೆ ಸಾದ್ಯವಾದಷ್ಟು , ತಿಳಿದಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದೇನೆ.....


ಪ್ರತಿಯೊಂದು ಮನುಷ್ಯನಲ್ಲೂ ಕೆಲವು ಭಾವೊದ್ವೇಗಗಳಿರುತ್ತವೆ. ಅದರಲ್ಲೂ ಒಂದು ಮುಖ್ಯವಾದ ಸಂಗತಿಯೆಂದರೆ ಯಾರಾದರೂ ತಮ್ಮ ಕೆಲಸಗಳಲ್ಲಿ ಅಡ್ಡಗಲ್ಲಾಗಿ ನಿಲ್ಲುವುದೋ ಇಲ್ಲವೇ , ತಮ್ಮ ಕೆಲಸಗಳನ್ನು ಆಡ್ಡಿಪಡಿಸಲು ಯಾರಾದರೂ ಬಂದಾಗ ತೀವ್ರವಾಗಿ ಹತಾಶರಾಗಿ ತಮ್ಮ ಕೆಲಸಗಳನ್ನು ಮುಂದುವರೆಸಲು ಆಗದೆ ತಮ್ಮನ್ನು ತಾವೇ ಆತ್ಮಹತ್ಯೆಯಂತಹ ಶಿಕ್ಷೆಗಳಿಗೆ ಬಲಿಪಶುಗಳಾಗುವುದು.


ಮುಖ್ಯವಾಗಿ ಹೆಚ್ಚಿನ ಜನರು ತಮಗೆ ಅಡ್ಡಗಲಾಗಿ ಬಂದವರನ್ನು ಎದುರಿಸಲಾಗದೆ ತಮ್ಮ  ಪ್ರಯತ್ನವನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ. ಇದು ಉದಯೊನ್ಮುಕ ವ್ಯಕ್ತಿತ್ವಗಳಿಗೆ ತಕ್ಕುದಾದ ನಡೆಯಲ್ಲ....ಹೆಚ್ಚಿನವರು ತಮ್ಮ ಕೆಲಸಗಳಲ್ಲಿ ಅಡ್ಡಿಯಾಗುವವರು ಯಾವ ಕಾರಣದಿಂದಾಗಿ ಅಡ್ಡಿಯಾಗುತ್ತಿದ್ದಾರೆ ಮತ್ತು ಅದರಿಂದ ಹೇಗೆ ದೂರವಿರಬಹುದು ಎಂಬುದಾಗಿ ಯೋಚಿಸುವುದನ್ನು ಬಿಟ್ಟು ಉದ್ವೇಗಕ್ಕೆ ಒಳಗಾಗಿ ಭಾವನಾತ್ಮಕ ತುಲನೆಗಳಿಗೆ ಒಳಪಟ್ಟು ದುಃಖಕ್ಕೀಡಾಗುತ್ತಿದ್ದಾರೆ.


ಎಲ್ಲರೂ ಯೋಚಿಸಲಾಗದ ಒಂದು ಸತ್ಯವೆಂದರೆ "No stones are thrown on a fruitless tree" ಅಂದರೆ
ಫಲವಿಲ್ಲದ ಮರಕ್ಕೆ ಎಂತಹ ಮೂರ್ಖನೂ ಸಹ ಕಲ್ಲನ್ನು ಎಸೆಯುವುದಿಲ್ಲ. ನೀವು ಮಾಡುವ ಕೆಲಸಗಳಿಗೆ ಯಾರಾದರೂ ಅಡ್ಡಿಯಾಗುತ್ತಿದ್ದಾರೆಂದರೆ ನೀವು ಫಲದಿಂದ ತುಂಬಿರುವ ಮರವಿದ್ದಂತೆ  ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಕೆಲಸಗಳಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಕಾರ್ಯೋನ್ಮಕವಾಗಬೇಕು. ಆಗ ವೇಗವಾಗಿ ಓಡುವ ಕುದುರೆಗೆ ಕಲ್ಲೆಸೆದರೆ ಹೇಗೆ ಕುದುರೆಗೆ ತಾಗುವುದಿಲ್ಲವೋ ಹಾಗೆಯೆ ನಿಮಗೆ ಅಡ್ಡಗಾಲಾಗಿ ಬರುವವರು ನಿಮ್ಮ ಪ್ರಯತ್ನದ ಮುಂದೆ ತೄಣವಾಗಿ ಕಾಣುತ್ತಾರೆ.


ಜೀವನವೆಂಬುದು ಬಹುದೊಡ್ಡ ಪ್ರಯಾಣವಿದ್ದಂತೆ, ಯಾವ ವ್ಯಕ್ತಿಯೂ ಸಹ ಜೀವನದ ಭೂಪಟವನ್ನು ಹೊಂದಿರುವುದಿಲ್ಲ. ಆದ್ದರಿಂದ ನಾವು ನಮ್ಮದೇ ಆದಂತಹ ದಾರಿಗಳಲ್ಲಿ ನಡೆದು ನಮ್ಮ ಗುರಿಯನ್ನು ತಲುಪಬೇಕು. ನಮ್ಮ ದಾರಿಗಳನ್ನು ನಾವೇ ಹುಡುಕಿಕೊಂಡು ಬೇರೆಯವರ ದಾರಿಯಲ್ಲಿ ನಾವು ನಡೆಯದ್ದಿದ್ದಾಗ ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ.ಆಗ ನಮಗೆ ಯಾರೂ ಸಹ ಅಡ್ಡಗಾಲಾಗಿ ಬರುವ ಪ್ರಮೇಯಗಳಿರುವುದಿಲ್ಲ..


ಆದರೆ ಅಂತಹ ದಾರಿಗಳನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹ ಸಮಯದಲ್ಲಿ ನಮ್ಮ ಉದಯೋನ್ಮುಖ  ಹೋರಾಟ ನಮ್ಮ ಸ್ವಾಭಿಮಾನದಿಂದಲ್ಲ , ನಮ್ಮ ಮನಸ್ಸಿನಿಂದ.... ನಮ್ಮ ಹೊರಾಟದಲ್ಲಿ ನಮ್ಮ ದಾರಿಗೆ ಅಡ್ಡಗಲಾಗಿ ಬರುವ ಶತ್ರುವಿಗೂ ನೋವಾಗದಂತೆ ನಮ್ಮ ಹೋರಾಟ ಮುಂದುವರೆದಾಗ ನಮ್ಮ ದಾರಿಗೆ ಅಡ್ಡಬರುವವರಿಗೂ ಕೂಡ ಭಾವನಾತ್ಮಕ ತುಲನೆಗಳು ಕಾಡುತ್ತವೆ..,, ಆಗ ಯಾರೂ ಸಹ ನಮ್ಮ ದಾರಿಗೆ ಅಡ್ಡಬರುವುದಿಲ್ಲ....


ನಾವು ನಮ್ಮ ಜೀವನದಲ್ಲಿ ಒಂದು ಮಾತನ್ನು ನೆನಪಿನಲ್ಲಿಡುವುದು ಅವಶ್ಯವಾಗಿದೆ ಅದೇನೆಂದರೆ..., "if we can't find the brighter side in life , then polish the darker side....!!" ಅಂದರೆ ಜೀವನದಲ್ಲಿ ಬೆಳಕನ್ನು ಕಾಣದ್ದಿದ್ದಾಗ ಕತ್ತಲೆಯಲ್ಲಿಯೇ ಬೆಳಕನ್ನು ಕಾಣಲು ಪ್ರಯತ್ನಿಸಬೇಕು. ಬೆಳಕು ಕತ್ತಲೆಯಲ್ಲಿಯೇ ಹೆಚ್ಚು ಪ್ರಖರವಾಗಿರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಂಡಾಗ ನಮ್ಮ ಸ್ಥಾನ , ನಮ್ಮ ಶಕ್ತಿ ನಮಗೆ ಅರಿವಾಗುತ್ತದೆ.......

                                                                              - Amar $hereddy

Saturday, January 1, 2011

ಜೀವನ ಅನರ್ಥವೇ.....??



ಜೀವನ ಅನರ್ಥವೇ ಎನ್ನುವ ಪ್ರಶ್ನೆಗೆ ಉತ್ತರ ದೊರಕುವುದು ಅಷ್ಟು ಸುಲಭದ ಮಾತಲ್ಲ......!!
ಕೆಲವರು ತಮಗೆ ತಿಳಿದ ಉತ್ತರವನ್ನು ಕೊಡಬಹುದು ಆದರೇ.......??
ಉತ್ತರ ನೀಡುವವರು ತಮ್ಮ ಆತ್ಮಸಾಕ್ಷ್ಶಿಗೆ ತಕ್ಕ ಉತ್ತರ ನೀಡಲಾರರು.......!!
ಜೀವನ ಒಂದು ಸಾಗರವಿದ್ದಂತೆ ಅದಕ್ಕೆ ಎಷ್ಟೇ ನದಿಗಳ ಸಿಹಿ ನೀರು ಸೇರಿದರೂ ಅದು ಉಪ್ಪೇ...!!
.
ನಾವು ನಮ್ಮ ಜೀವನದಲ್ಲಿ ಎಷ್ಟೇ ಸುಖದಿಂದ ಬಾಳಿದರೂ ಕೆಲವು ಮರೆಯಲಾಗದ ಕಹಿ ನೆನಪುಗಳು
ನಮ್ಮನ್ನು ಕಾಡುತಿರುತ್ತವೆ.... ಆ ಕಹಿ ನೆನಪುಗಳು ನಮ್ಮ ಜೀವನದ ಅಮೂಲ್ಯವಾದ ಸಿಹಿ ಕ್ಷಣಗಳನ್ನು
ನುಂಗಿ ಹಾಕುತ್ತವೆ...!! ಆ ಕಹಿ ನೆನಪುಗಳಲ್ಲಿ ನಮ್ಮ ಸಿಹಿ ಕ್ಷಣಗಳನ್ನು ಮರೆಯುತ್ತೇವೆ.....!!
ನಮ್ಮ ಜೀವನವನ್ನು ಹಾಳು ಮಾಡಿಕೊಳ್ತೆವೆ......!!
.
ನಾವು ಬಾಳುವ ಜೀವನಕ್ಕೆ ಒಂದು ಅರ್ಥವಿರಬೇಕು......!!
ನಮ್ಮ ಜೀವನದಲ್ಲಿ ಎಷ್ಟೋ ಅನರ್ಥ ವಿಷಯಗಳು ಇರಬಹುದು ಆದರೇ ಜೀವನವೇ ಅನರ್ಥವೆಂದು
ಹೇಳಲು ಆಗದು.........!!
ಕೆಲವರು ಹೇಳಬಹುದು " ಹಾಲಿನಲ್ಲಿ ಒಂದು ಹನಿ ವಿಷ ಸೇರಿದರೆ ಹಾಲೂ ಕೂಡ ವಿಷವಾಗುತ್ತೆ" ಎಂದು
ಅದೇ ರೀತಿ ನಮ್ಮ ಬಾಳು ಕೂಡ ಅನರ್ಥವಾಗುತ್ತೆ ಅಂತ.......!!
ಆದರೇ ನಮ್ಮ ಮನಸೆಂಬ ಹಾಲು ವಿಷಕ್ಕಿಂತ ಶಕ್ತಿಯುತವಾದುದು.....!! ಅದು ಎಷ್ಟೋ ಪವಿತ್ರವಾದುದು
ಕೂಡ...!!
.
ಕೆಲವು ಸಣ್ಣ ಕಾರಣಗಳಿಂದ ನಮ್ಮ ಜೀವನ ಅರ್ಥ ಕಳೆದುಕೊಳ್ಳುವುದಿಲ್ಲ....!!
ನಮ್ಮ ಜೀವನಕ್ಕೆ ಅರ್ಥವನ್ನು ತುಂಬಬೇಕು... ಕೇವಲ ಕೆಲವು ಅನರ್ಥಗಳಿಂದ ಜೀವ ಕಳೆದುಕೊಂಡರೆ
ಮರಳಿಬಾರದು.....!!
ಅನರ್ಥಗಳಿಂದ ಜೀವ ಮತ್ತು ಜೀವನ ನಂದಿ ಹೋಗಬಾರದು......!!